ಹೈದರಾಬಾದ್ ನೆಕ್ಸಾನ್ EV ಅಗ್ನಿ ಅವಘಡ: Tata Motors ಗೆ 16.95 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ
ಟಾಟಾ ನೆಕ್ಸಾನ್ EV (Tata Nexon EV) ಕಾರು ಸ್ವಯಂಚಾಲಿತವಾಗಿ ಬೆಂಕಿ ಹತ್ತಿಕೊಂಡ ಘಟನೆಯಲ್ಲಿ ಗ್ರಾಹಕನಿಗೆ ನ್ಯಾಯ ಸಿಕ್ಕಿದೆ. ಹೈದರಾಬಾದ್ನ (Hyderabad) ಗ್ರಾಹಕ ನ್ಯಾಯಾಲಯವು, ಟಾಟಾ ಮೋಟಾರ್ಸ್ (Tata Motors) ಕಂಪನಿಯು ಕಾರಿನ ತಯಾರಿಕೆಯಲ್ಲಿ ತಪ್ಪು ಮಾಡಿದ್ದಕ್ಕೆ ಹೊಣೆಯಾಗಿದೆ ಎಂದು ಘೋಷಿಸಿದೆ ಮತ್ತು ಕಾರಿನ ಪೂರ್ತಿ ಬೆಲೆಯನ್ನು ಗ್ರಾಹಕನಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದೆ. ಈ ತೀರ್ಪು, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಲ್ಲಿ ಆತಂಕವನ್ನು ಹೆಚ್ಚಿಸಿದೆ ಮತ್ತು ಕಂಪನಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
2022ರಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ ಜೋನಾಥನ್ ಬ್ರೈನಾರ್ಡ್ ಅವರಿಗೆ ಅನಿರೀಕ್ಷಿತ ಘಟನೆ ಎದುರಾಯಿತು. ಕಾರು ಚಲಿಸುತ್ತಿರುವಾಗಲೇ ಅದು ಬೆಂಕಿ ಹೊತ್ತಿಕೊಂಡಿದ್ದು, ಬ್ರೈನಾರ್ಡ್ ಅವರು ಗಂಟೆಗೆ ಕೇವಲ 38 ಕಿಮೀ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರೂ ಈ ಘಟನೆ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೂನ್ 1, 2023ರಂದು ಸಂಭವಿಸಿದ ಘಟನೆಯಲ್ಲಿ, ಕಾರು ಬೆಂಕಿಯಲ್ಲಿ ಸುಟ್ಟು ಕರಕಲಾಯಿತು. ಅದೃಷ್ಟವಶಾತ್, ಕಾರಿಗೆ ಬೆಂಕಿ ಹೊತ್ತಿಕೊಂಡ ಕೂಡಲೇ ಬ್ರೈನ್ಡ್ ಅವರು ವಾಹನದಿಂದ ಹೊರಬಂದು ಅಪಾಯದಿಂದ ಪಾರಾದರು. ಬೆಂಕಿಯ ಉರಿಯು ಭೀಕರವಾಗಿದ್ದು, ಕ್ಷಣಮಾತ್ರದಲ್ಲಿ ಕಾರಿನ ಬಾಗಿಲುಗಳು ಜಾಮ್ ಆಗಿಬಿಟ್ಟಿದ್ದವು. ಅಂತಿಮ ಕ್ಷಣದಲ್ಲಿ ಪಕ್ಕದ ಬಾಗಿಲಿನ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡ ಬಗ್ಗೆ ನ್ಯಾಯಾಲಯದಲ್ಲಿ ತಿಳಿಸಿದರು.
ಇದನ್ನೂ ಓದಿ: ಕೈಗೆಟುಕುವ ಬೆಲೆ, ಸಖತ್ ಮೈಲೇಜ್ನ ಟಾಟಾ ನೆಕ್ಸಾನ್ ಸಿಎನ್ಜಿ ಬಿಡುಗಡೆ

ದೂರುದಾರರು Nexon EV ಅನ್ನು ಆಯ್ಕೆ ಮಾಡಿಕೊಂಡಿದ್ದು, ಜಾಗತಿಕ NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ 5-ಸ್ಟಾರ್ ರೇಟಿಂಗ್ ಪಡೆದು ಭಾರತದಲ್ಲಿನ ಸುರಕ್ಷಿತ ವಾಹನಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕಾರಣ. ಅತ್ಯುತ್ತಮ ಸೌಲಭ್ಯಗಳು, ಬಳಕೆಯ ಸುಲಭತೆ ಮತ್ತು ವಿಶ್ವಾಸಾರ್ಹತೆಯ ಭರವಸೆಯೊಂದಿಗೆ, ಈ ವಾಹನವನ್ನು ಆಯ್ಕೆ ಮಾಡುವಲ್ಲಿ ಅವರು ತೀರಾ ಸಂತೋಷವಾಗಿದ್ದರು. ಆದರೆ, ವಾಹನವನ್ನು ಬಳಸಿದ 11 ತಿಂಗಳ ಅವಧಿಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ಕಂಡುಬಂದವು. ಬ್ಯಾಟರಿಯಲ್ಲಿ 18% ಶೇಖರಣೆ ಇದ್ದರೂ ಕಾರು ಚಲಿಸದಿರುವುದು ಮತ್ತು ಸಾಮಾನ್ಯ ಡ್ರೈವ್ ಮೋಡ್ಗೆ ಬದಲಾಗದಿರುವುದು ಇಂತಹ ಸಮಸ್ಯೆಗಳಲ್ಲಿ ಪ್ರಮುಖವಾದವು.
ಟಾಟಾ ಸರ್ವಿಸ್ ಸೆಂಟರ್ನಲ್ಲಿ ಕಾರಿನ ಪರಿಶೀಲನೆ ವೇಳೆ, ಕಾರಿನ HV (ಹೈ ವೋಲ್ಟೇಜ್) ಬ್ಯಾಟರಿ ಪ್ಯಾಕ್ ಸಂಪೂರ್ಣವಾಗಿ ಖಾಲಿಯಾಗಿರುವುದು ಕಂಡು ಬಂತು. ಹೊಸ ಬ್ಯಾಟರಿ ಬದಲಿಸುವುದು ಅನಿವಾರ್ಯವಾದರೂ, ಒಂದು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಈ ಅವಧಿಯಲ್ಲಿ ಕಾರಿನ ಬಳಕೆಯನ್ನು ಕಡಿಮೆ ಮಾಡಬೇಕೆಂದು ಸೂಚಿಸಲಾಗಿತ್ತು. ಆದರೆ, ಅಷ್ಟೊಂದು ಕಾಲ ಕಾಯುವಿಕೆಯ ನಂತರ ಬಂದ ಬ್ಯಾಟರಿ ಹೊಸದಲ್ಲದೆ, ಹಳೆಯದನ್ನು ಮಾತ್ರ ಸರಿಪಡಿಸಿದ್ದು ಎಂದು ತಿಳಿದಾಗ ಬಹಳ ನಿರಾಶೆಯಾಯಿತು. ಕಾರು ಇನ್ನೂ ವಾರಂಟಿಯ ಅವಧಿಯಲ್ಲಿರುವುದರಿಂದ, ಹೊಸ ಬ್ಯಾಟರಿ ಬದಲಿಸುವ ನಿರೀಕ್ಷೆಯಲ್ಲಿ ಇದ್ದೆ ಎಂದು ದೂರುದಾರ ಜೋನಾಥನ್ ಬ್ರೈನಾರ್ಡ್ ಹೇಳಿಕೊಂಡಿದ್ದಾರೆ.
ನವೀಕರಿಸಿದ ಬ್ಯಾಟರಿ ಅಳವಡಿಸಿದ ಕೇವಲ 12 ದಿನಗಳಲ್ಲಿಯೇ ಈ ಅನಾಹುತ ಸಂಭವಿಸಿದ್ದು ಚಿಂತಾಜನಕ. ಚಲಿಸುತ್ತಿದ್ದ ವೇಳೆ, ಕಾರಿನ ಕೆಳಭಾಗದಿಂದ ಬಲವಾದ ಶಬ್ದ ಕೇಳಿಸಿತು. ಭಯಗ್ರಸ್ತರಾದ ಮಾಲೀಕರು ವಾಹನ ನಿಯಂತ್ರಣ ಕಳೆದುಕೊಂಡು ಮೊದಲು ನಿಂತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿ ಹೊಡೆದರು. ವಾಹನದಿಂದ ಹೊರಬಂದಾಗ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಆತಂಕಗೊಂಡರು.
ಇದನ್ನೂ ಓದಿ: ಹೊಸ ಟಾಟಾ ನೆಕ್ಸಾನ್ ಇವಿ 45 ಕಿಲೋ ವ್ಯಾಟ್ ಬ್ಯಾಟರಿಯೊಂದಿಗೆ ಬಿಡುಗಡೆ
ನ್ಯಾಯಾಲಯದ ಆದೇಶ
ಎರಡೂ ಕಡೆಯವರ ವಾದಗಳನ್ನು ಸಮಗ್ರವಾಗಿ ವಿಚಾರಣೆ ನಡೆಸಿದ ನಂತರ, ಗ್ರಾಹಕ ನ್ಯಾಯಾಲಯವು ದೂರುದಾರರ ಪರವಾಗಿ ತೀರ್ಪು ನೀಡಿದೆ. ನ್ಯಾಯಾಲಯವು, ವಾಹನದಲ್ಲಿ ಉತ್ಪಾದನಾ ದೋಷವಿರುವುದನ್ನು ಸ್ಪಷ್ಟವಾಗಿ ಗಮನಿಸಿದೆ ಮತ್ತು ಕಂಪನಿಯು ಕ್ರಮಗಳು ಅನ್ಯಾಯದ ವ್ಯಾಪಾರ ಪದ್ಧತಿಯನ್ನು ಪ್ರತಿಬಿಂಬಿಸುತ್ತವೆ ಎಂದು ತೀರ್ಮಾನಿಸಿದೆ. ನ್ಯಾಯಾಲಯವು ಈ ಕೆಳಗಿನಂತೆ ಪರಿಹಾರವನ್ನು ಆದೇಶಿಸಿದೆ.
ವಾಹನದ ಮೂಲ ಬೆಲೆಯಾದ ರೂ. 16,95,000/- ನ್ನು ದೂರುದಾರರಿಗೆ ಹಿಂತಿರುಗಿಸಬೇಕು.
ಬಾಕಿ ಹಣದ ಮೇಲೆ, ಪೂರ್ತಿ ಪಾವತಿಯ ದಿನವರೆಗೂ, ಶೇಕಡಾ 9 ರಷ್ಟು ಬಡ್ಡಿಯನ್ನು ನೀಡಬೇಕು.
ದೂರುದಾರರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕಾಗಿ ರೂ. 2,50,000/- ಪರಿಹಾರವನ್ನು ನೀಡಬೇಕು. ಈ ಮೊತ್ತವು ಅಪಘಾತದಲ್ಲಿ ಗಾಯಗೊಂಡ ದ್ವಿಚಕ್ರವಾಹನ ಸವಾರ ಶ್ರೀ ವಿ. ಬಾಲನರಸಯ್ಯ ಅವರ ಚಿಕಿತ್ಸಾ ವೆಚ್ಚ ಮತ್ತು ಪರಿಹಾರವನ್ನು ಸಹ ಒಳಗೊಂಡಿದೆ.
ದೂರುದಾರರು ಖರ್ಚು ಮಾಡಿದ ರೂ. 10,000/- ನ್ನು ವಾಪಸು ನೀಡಬೇಕು.